ಶಿಕ್ಷಕರ ಶಿಕ್ಷಣ: ನೀತಿ ಮತ್ತು ಅನುಷ್ಠಾನದ ಸುತ್ತ
ಬಿ. ಎಸ್. ರಿಷಿಕೇಶ್ ಮತ್ತು ನಾಗರಾಜ್ಕೆ. ಕಾಳೆ ಅವರೊಂದಿಗೆ ಕೆ. ಗುರುರಾಜ ರಾವ್ರವರು ಸಂವಾದ ನಡೆಸಲಿದ್ದಾರೆ.
![Kannada Webinar 22 Aug 2023 Thumbnail](https://cdn.azimpremjiuniversity.edu.in/imager/photos/events/2023/878824/Kannada-Webinar_22-Aug-2023Thumbnail_4b32b63c5c28c858e051e9d1a2a717a1.jpg)
ಶಿಕ್ಷಣ ಕ್ಷೇತ್ರದ ಅಭಿವೃದ್ದಿಯಲ್ಲಿ ‘ಶಿಕ್ಷಕರ ಗುಣಮಟ್ಟದಲ್ಲಿ’ ಸುಧಾರಣೆ ತರುವುದು ಅತ್ಯಂತ ನಿರ್ಣಾಯಕ ಅಂಶವೆಂದು ಬಹುತೇಕ ಶಿಕ್ಷಣ ಕ್ಷೇತ್ರದ ಎಲ್ಲಾ ಭಾಗೀದಾರರು ಒಪ್ಪುತ್ತಾರೆ. ಶಿಕ್ಷಕ ಗುಣಮಟ್ಟದ ಸುಧಾರಣೆಗೆ ವಿವಿಧ ಹಂತಗಳಲ್ಲಿ — ಅಂದರೆ ನೀತಿ ಅನುಷ್ಠಾನ, ಮತ್ತು ಶಿಕ್ಷಕರ ಶಿಕ್ಷಣ ಮಟ್ಟದಲ್ಲಿ — ಕಾರ್ಯಪ್ರವೃತ್ತವಾಗಬೇಕಾಗುತ್ತದೆ.
ಇದನ್ನು ಸಾಧಿಸಲು ಈ ವಿಚಾರಗಳ ಕುರಿತು ವ್ಯವಸ್ಥಿತವಾಗಿ, ಅಂಕಿ-ಅಂಶ ಸಹಿತ ಮತ್ತು ವಾಸ್ತವಿಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಚರ್ಚೆಗಳಾಗಬೇಕಾಗುತ್ತದೆ. ಇಂತಹ ಚರ್ಚೆಗಳಲ್ಲಿ ಗುರುತಿಸಬೇಕಾದ ಸಂಗತಿಗಳ ಬಗೆಗೆ ವಿಸ್ತೃತವಾದ ಚರ್ಚೆಗೆ ನಮ್ಮ ಈ ವೆಬಿನಾರ್ನಲ್ಲಿ ಪಾಲ್ಗೊಳ್ಳಿ.
ಲೇಖನವನ್ನು ಓದಲು ಈ ಲಿಂಕ್ https://anuvadasampada.azimpremjiuniversity.edu.in/2199/ ನ್ನು ಬಳಸಿ.
ವೆಬಿನಾರ್ನ ವಿವರಗಳನ್ನು ಪಡೆಯಲು ಇಲ್ಲಿ ನೋಂದಾಯಿಸಿಕೊಳ್ಳಿ : https://bit.ly/3ZzwH9S