ಗಣಿತ ಶಿಕ್ಷಕರ ತರಬೇತಿಗಳಿಗೆ ಚೈತನ್ಯ ತುಂಬುವುದು ಹೇಗೆ?
ಎಸ್. ಎನ್. ಗಣನಾಥ ಮತ್ತು ಅಮೃತಾ ನಿತಿನ್ಶಾಸ್ತ್ರಿ ಅವರೊಂದಿಗೆ ಎನ್. ಸೌಮ್ಯರವರು ಸಂವಾದ ನಡೆಸಲಿದ್ದಾರೆ.
![Kannada Webinar 25 July 2023](https://cdn.azimpremjiuniversity.edu.in/imager/photos/852602/Kannada-Webinar_25-July-2023_4b32b63c5c28c858e051e9d1a2a717a1.jpg)
ಮಕ್ಕಳು ಪ್ರಾಥಮಿಕ ಹಂತದಲ್ಲಿ ಸಂಖ್ಯಾಜ್ಞಾನದ ಸಾಮರ್ಥ್ಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಪಡೆಯುತ್ತಿಲ್ಲವೆಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ತರಗತಿ ಪ್ರಕ್ರಿಯೆ ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಲೆಕ್ಕಾಚಾರ ಮತ್ತು ಕ್ರಮವಿಧಿಗೆ ನೀಡುತ್ತಿರುವ ಹೆಚ್ಚಿನ ಆದ್ಯತೆಯೇ ಈ ಪರಿಸ್ಥಿತಿಗೆ ಮುಖ್ಯವಾದ ಕಾರಣ. ಈ ಸಂದರ್ಭದಲ್ಲಿ, ಗಣಿತ ಕಲಿಕೆಯ ನಿಜವಾದ ಆಶಯಗಳನ್ನು ಈಡೇರಿಸುವಂತೆ ಶಿಕ್ಷಕರ ತರಬೇತಿಗಳನ್ನು ಮರುರೂಪಿಸಬಹುದಾದ ಬಗೆಗಳನ್ನು ಈ ಸಂವಾದದಲ್ಲಿ ಚರ್ಚಿಸಲಾಗುತ್ತದೆ.
ಚರ್ಚೆಯು ಕನ್ನಡದಲ್ಲಿಯೇ ನಡೆಯುತ್ತದೆ.
ವೆಬಿನಾರ್ ಶೀರ್ಷಿಕೆ: ಗಣಿತ ಶಿಕ್ಷಕರ ತರಬೇತಿಗಳಿಗೆ ಚೈತನ್ಯ ತುಂಬುವುದು ಹೇಗೆ?
ಲೇಖನವನ್ನು ಓದಲು ಈ ಲಿಂಕನ್ನು ಬಳಸಿ.
ವೆಬಿನಾರ್ನ ವಿವರಗಳನ್ನು ಪಡೆಯಲು ಇಲ್ಲಿ ನೋಂದಾಯಿಸಿಕೊಳ್ಳಿ: https://bit.ly/3ZzwH9S
ಹೆಚ್ಚಿನ ಮಾಹಿತಿಗೆ:
https://anuvadasampada.azimpremjiuniversity.edu.in/